state news ಸಿ.ಜೆ. ರಾಯ್ ಆತ್ಮಹತ್ಯೆ ಕೇಸ್ : ಸಾವಿಗೂ ಮುನ್ನ ಮನೋವೈದ್ಯರ ಕೌನ್ಸೆಲಿಂಗ್, ಹೊರಬಿದ್ದ ಸ್ಫೋಟಕ ಮಾಹಿತಿ!
"This is state news"
ಬೆಂಗಳೂರು : ಕಾನ್ಫಿಡೆಂಟ್ ಗ್ರೂಪ್ನ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಹೊಸ ಆಯಾಮ ಪಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯ ತನಿಖೆ ನಡೆಯುತ್ತಿದ್ದಾಗಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಅವರ ಸುತ್ತ ಹಲವು ಅನುಮಾನಗಳು ಸುಳಿದಾಡುತ್ತಿವೆ. ಈ ಮಧ್ಯೆ, ರಾಯ್ ಅವರ ಸಾವಿಗೆ ಮಾನಸಿಕ ಸ್ಥಿತಿಯೇ ಕಾರಣವೇ ಎಂಬ ಪ್ರಶ್ನೆಗೆ ಪುಷ್ಠಿ ನೀಡುವ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಅವರು ಕಳೆದ ಹಲವು ದಿನಗಳಿಂದ ಮನೋವೈದ್ಯರಿಂದ ಕೌನ್ಸೆಲಿಂಗ್ ಪಡೆಯುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
state news ಭಾರತದ ಮೇಲಿನ ಆಮದು ಸುಂಕ ಇಳಿಕೆ - ಮೋದಿಯೊಂದಿಗೆ ಮಾತುಕತೆ ನಂತರ ಟ್ರಂಪ್ ಘೋಷಣೆ
"This is state news"
ಇಂದು ಬೆಳಿಗ್ಗೆ ಭಾರತದ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನನಗೆ ಹೆಮ್ಮೆ ಎನಿಸಿದೆ. ಅವರು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಮತ್ತು ಅವರು ತಮ್ಮ ದೇಶದ ಪ್ರಭಾವಶಾಲಿ ಮತ್ತು ಗೌರವಾನ್ವಿತ ನಾಯಕ. ವ್ಯಾಪಾರ, ರಷ್ಯಾ ಮತ್ತು ಉಕ್ರೇನ್ನೊಂದಿಗಿನ ಯುದ್ಧವನ್ನು ಕೊನೆಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ. ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಬಹುಶಃ ವೆನೆಜುವೆಲಾದಿಂದ ಹೆಚ್ಚಿನದನ್ನು ಖರೀದಿಸಲು ಅವರು ಒಪ್ಪಿಕೊಂಡರು. ಇದು ಉಕ್ರೇನ್ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ.
A significant outcome of their conversation was **Prime Minister Modi's** agreement to cease purchasing **Russian** oil. Instead, **India** would increase its oil imports from the **United States** and potentially **Venezuela**. This strategic shift is aimed at contributing to the de-escalation and eventual conclusion of the war in **Ukraine**.
**Key Highlights:**
- A global leader spoke with **Indian Prime Minister Modi** regarding international issues.
- Discussions included trade, the **Russia-Ukraine** war, and efforts to end the conflict.
- **PM Modi** reportedly agreed to stop purchasing **Russian** oil.
- **India** will increase oil imports from the **United States** and potentially **Venezuela**.
- The move is intended to help end the war in **Ukraine**.
ಮತದಾರರ ಪಟ್ಟಿ ಪರಿಷ್ಕರಣೆ : ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಹೆಸರು ಡಿಲೀಟ್
ಚೆನ್ನೈ: ತಮಿಳುನಾಡಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ, ಅಂದರೆ SIR ಪ್ರಕ್ರಿಯೆ ನಂತರದ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅವರು ಇಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಅಂತಿಮ ಪಟ್ಟಿಯಂತೆ, ರಾಜ್ಯದಲ್ಲಿ ಒಟ್ಟು 5 ಕೋಟಿ 67 ಲಕ್ಷಕ್ಕೂ ಅಧಿಕ ಮತದಾರರು ಇದ್ದು, ಇದರಲ್ಲಿ 2.89 ಕೋಟಿ ಮಹಿಳೆಯರು ಮತ್ತು 2.77 ಕೋಟಿ ಪುರುಷ ಮತದಾರರು ಸೇರಿದ್ದಾರೆ.
590 ಕೋಟಿ ರೂ. ಅಕ್ರಮ ನಡೆದಿರುವುದು ದೃಢಪಟ್ಟಿದೆ.
ಸರ್ಕಾರಿ ಇಲಾಖೆಯ ಪುಸ್ತಕಗಳಲ್ಲಿ ನಮೂದಿಸಲಾದ ಮೊತ್ತಕ್ಕೂ ಬ್ಯಾಂಕ್ ಖಾತೆಯಲ್ಲಿನ ವಾಸ್ತವ ಬ್ಯಾಲೆನ್ಸ್ಗೂ ಹೊಂದಾಣಿಕೆಯಾಗದಿರುವುದು ಈ ವಂಚನೆಯ ಮೂಲ. ಮೊತ್ತದಲ್ಲಿನ ಭಾರಿ ವ್ಯತ್ಯಾಸದಿಂದಾಗಿ, ಇಲಾಖೆಯು ತನ್ನ ಬ್ಯಾಂಕ್ ಖಾತೆಯನ್ನು ಮುಚ್ಚಿ ಬೇರೆಡೆಗೆ ವರ್ಗಾಯಿಸಲು ಮನವಿ ಮಾಡಿದಾಗ ಈ ವಂಚನೆಯ ಸುಳಿವು ಸಿಕ್ಕಿದೆ.
ಫೆಬ್ರವರಿ 18 ರಿಂದ, ಹರಿಯಾಣದ ಹಲವಾರು ಸರ್ಕಾರಿ ಇಲಾಖೆಗಳು ತಮ್ಮ ಖಾತೆಗಳಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿದೆ ಎಂದು ದೂರು ನೀಡಿವೆ. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ನಡೆಸಿದ ಸಮಗ್ರ ಪರಿಶೀಲನೆಯಲ್ಲಿ ಒಟ್ಟು 590 ಕೋಟಿ ರೂ. ಅಕ್ರಮ ನಡೆದಿರುವುದು ದೃಢಪಟ್ಟಿದೆ.
- Read more about 590 ಕೋಟಿ ರೂ. ಅಕ್ರಮ ನಡೆದಿರುವುದು ದೃಢಪಟ್ಟಿದೆ.
- Log in or register to post comments
ಸರ್ಕಾರಿ ಖಾತೆಯಲ್ಲೇ 590 ಕೋಟಿ ರೂ. ಮಾಯ - ಬ್ಯಾಂಕ್ ಉದ್ಯೋಗಿಗಳ ಕೈವಾಡ ಬಯಲು!
ಹರಿಯಾಣ ಸರ್ಕಾರದ ಇಲಾಖೆಗಳ ಖಾತೆಯಲ್ಲಿ ಸುಮಾರು 590 ಕೋಟಿ ರೂ. ಮೊತ್ತದ ಬೃಹತ್ ವಂಚನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಕುರಿತು ಬ್ಯಾಂಕ್ ತನಿಖೆಯನ್ನು ಆರಂಭಿಸಿದೆ.
ಅಭಿವೃದ್ಧಿಯೊಂದಿಗೆ ಪರಿಸರ ರಕ್ಷಣೆಗೆ ಆದ್ಯತೆ ನೀಡಿ-ಲೋಖಂಡೆ ಸ್ನೇಹಲ್ ಸುಧಾಕರ್
ಬೆಂಗಳೂರು:ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್.ಪುರ ವಲಯದಲ್ಲಿ ವಿಭಿನ್ನ ರೀತಿಯಲ್ಲಿ ಜಂಕ್ಷನ್ ಗಳನ್ನು ಅಭಿವೃದ್ಧಿಪಡಿಸುವ ಕುರಿತು ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸುವ ಸಲುವಾಗಿ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ರವರು ಇಂದು ಸ್ಥಳ ಪರಿಶೀಲನೆಯನ್ನು ನಡೆಸಿದರು.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೆ.ಆರ್.ಪುರ ಮತ್ತು ವಿಜ್ಞಾನನಗರ ಜಂಕ್ಷನ್ಗಳನ್ನು ಪರಿಶೀಲನೆ ನಡೆಸಿದ ಅಪರ ಆಯುಕ್ತರು ವಿಭಿನ್ನ ರೀತಿಯಲ್ಲಿ ಹಾಗೂ ಸಂಚಾರ ದಟ್ಟಣೆ ಉಂಟಾಗದಂತೆ ವೈಜ್ಞಾನಿಕವಾಗಿ ಜಂಕ್ಷನ್ ಗಳ ಅಭಿವೃದ್ಧಿಪಡಿಸಲು ಸಂಚಾರಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯಸಾಧ್ಯತೆ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಅಪರ ಆಯುಕ್ತರು ಸೂಚಿಸಿದರು.
ರಸ್ತೆ ಬದಿಯಲ್ಲಿ ಮತ್ತು ಪಾದಚಾರಿ ಮಾರ್ಗದಲ್ಲಿ ನೆಡಲಾಗಿರುವ ವೃಕ್ಷಗಳ ಸುತ್ತಲೂ ಕಾಂಕ್ರೀಟ್, ಡಾಂಬರು ಹಾಗೂ ಇಂಟರ್ ಲಾಕ್ ಪೇವರ್ ಅಳವಡಿಸುವುದರಿಂದ ಮರಗಳ ಬೇರು ಸದೃಢತೆ ಕಳೆದುಕೊಂಡು ಮಳೆ ಮತ್ತು ಗಾಳಿಯಿಂದಾಗಿ ಉರುಳಿ ಪ್ರಾಣಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮರಗಳ ಸಂರಕ್ಷಣೆಗಾಗಿ ಮಹತ್ವದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಆಯುಕ್ತರು ಸೂಚಿಸಿದರು.