Crime Section on app home section for crime
2-ಹುಬ್ಬಳ್ಳಿ: ಫ್ಲೈ ಓವರ್ ಕಾಮಗಾರಿಯಿಂದ ಚನ್ನಮ್ಮ ಮೂರ್ತಿ ಸ್ಥಳಾಂತರ ಆಗುತ್ತಾ..? ಆಯುಕ್ತರು ಹೇಳಿದ್ದೇನು.?
ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಲಭಿಸಿದೆ. ಹಣದ ಆಮಿಷವೊಡ್ಡಿ ಮುಡಾ ಹಗರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧವೂ ಕಮಿಷನ್ ಆರೋಪ ಮಾಡಿ ಸ್ನೇಹಮಯಿ ಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
1-ರಸ್ತೆ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನಿಗೆ ಡಿಕ್ಕಿ
ನೀವೂ ಅವಲಕ್ಕಿ ಪ್ರಿಯರಾ? ಹಾಗಿದ್ರೆ ಇಲ್ಲೊಮ್ಮೆ ನೋಡಿ. ಅವಲಕ್ಕಿ ಪ್ಯಾಕಿಂಗ್ ಹೇಗ್ ನಡೆಯುತ್ತೆ ಅಂತ. ನಿಜ ಹೇಳ್ಬೇಕಂದ್ರೆ ಅವಲಕ್ಕಿ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆದ್ರೆ ಈ ರೀತಿ ತಿನ್ನುವ ಅವಲಕ್ಕಿ ಮೇಲೆ ಕುತ್ಕೊಂಡು ಅದನ್ನ ಪ್ಯಾಕ್ ಮಾಡಿ ಗ್ರಾಹಕರಿಗೆ ಸಪ್ಲೈ ಮಾಡ್ತಾರೆ ಅಂತ ಗೊತ್ತಾದ್ಮೇಲೆ ಇದನ್ನ ನಿಜಕ್ಕೂ ತಿನ್ನೋಕೆ ಮನಸ್ಸೇ ಆಗಲ್ಲ.
ನಾವ್ ಯಾವಾಗ್ಲೂ ಹೈಜಿನ್ ಫುಡ್ ತಗೊಳ್ಬೇಕು, ಆರೋಗ್ಯ ಚೆನ್ನಾಗಿ ಇಟ್ಕೊಳ್ಬೇಕು ಅಂತ ಒಳ್ಳೆಯದನ್ನೇ ಆರಿಸಿ ತರ್ತೀವಿ. ಆದ್ರೆ ಅದೇ ಒಳ್ಳೆಯ ಫುಡ್ ಹೀಗೆ ತಯಾರಾಗುತ್ತೆ ಅಂದ್ರೆ ಏನ್ ಹೇಳೋದಲ್ವಾ? ಗ್ರಾಹಕರೇ ದೇವರು ಅಂತ ಹೇಳ್ತಾರೆ. ಆದ್ರೆ ಆ ಗ್ರಾಹಕರಿಗೆ ಹೇಗೆಲ್ಲಾ ಮೋಸ ಮಾಡ್ತಾರೆ ಅನ್ನೋದಕ್ಕೆ ಇದೂ ಕೂಡಾ ಒಂದು ಉದಾಹರಣೆಯಷ್ಟೇ…ಇವತ್ತು ಲಾಭದ ಆಸೆಗೆ ಹೈಜಿನ್ ಅನ್ನೋ ಪದವನ್ನೇ ಮರೆತಿರ್ತಾರೆ. ಇವ್ರಿಗೆಲ್ಲ ಜನರ ಆರೋಗ್ಯ ಚೆನ್ನಾಗಿದ್ರೆಷ್ಟು ಬಿಟ್ಟರೆಷ್ಟು… ಒಳ್ಳೆ ವ್ಯಾಪಾರ ಆಗ್ಬೇಕು ಲಾಭ ಆಗ್ಬೇಕು ಅಷ್ಟೇ… ಹಾಗಾಗಿ ಇವತ್ತು ನಾವು ತಿನ್ನುವ ಆಹಾರದಲ್ಲಿ ಬರೀ ಕೆಮಿಕಲ್ ತುಂಬಿದ್ದು, ನೈಸರ್ಗಿಕ ಆಹಾರವೇ ಸಿಗದಂತಾಗಿದೆ. ನೂರಾರು ಕಾಯಿಲೆಗಳಿಗೆ ಜನ ತುತ್ತಾಗ್ತಿದ್ದಾರೆ. ಇದನ್ನೆಲ್ಲಾ ನಿಯಂತ್ರಣ ಮಾಡ್ಬೇಕಾದ ಆಹಾರ ಸುರಕ್ಷತಾ ಪ್ರಾಧಿಕಾರ ಎಲ್ಲಿದೆ.
- Read more about 1-ರಸ್ತೆ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನಿಗೆ ಡಿಕ್ಕಿ
- Log in or register to post comments
ಸರ್ಕಾರಿ ನೌಕರರ ಸಂಘವೂ ಸಂಪೂರ್ಣ ಬೆಂಬಲ ಘೋಷಿಸಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ವೈದ್ಯರ ನೇಮಕದಲ್ಲಿ ವಿಳಂಬ, ಔಷಧ ಕೊರತೆ ಮತ್ತು ಆಡಳಿತ ವೈಫಲ್ಯವೇ ಈ ಹೋರಾಟಕ್ಕೆ ಕಾರಣ ಎಂದು ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ್ ಮೇಟಿ ಆರೋಪಿಸಿದ್ದಾರೆ. ವೈದ್ಯರ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘವೂ ಸಂಪೂರ್ಣ ಬೆಂಬಲ ಘೋಷಿಸಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಸರ್ಕಾರ ಸ್ಪಂದಿಸದಿದ್ದರೆ, ಮಾರ್ಚ್ 16ರಿಂದ ಕರ್ತವ್ಯ ಬಹಿಷ್ಕಾರ ಮೂಲಕ ಮುಷ್ಕರ ತೀವ್ರಗೊಳಿಸುವ ಎಚ್ಚರಿಕೆ ನೀಡಲಾಗಿದೆ.
ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಆರೋಗ್ಯ ಇಲಾಖೆ ನೌಕರರ ಸಂಘಗಳ ಸಂಯುಕ್ತ ನಿರ್ಧಾರದಂತೆ, ಮಾರ್ಚ್ 11 ರಿಂದ 15ರವರೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ಹೊರರೋಗಿಗಳ ಚಿಕಿತ್ಸೆ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ತುರ್ತು ಸೇವೆಗಳು ಮಾತ್ರ ಲಭ್ಯವಿರಲಿವೆ. ಸರ್ಕಾರ ಸ್ಪಂದಿಸದಿದ್ದರೆ, ಮಾರ್ಚ್ 16ರಿಂದ ಕರ್ತವ್ಯ ಬಹಿಷ್ಕಾರ ಮೂಲಕ ಮುಷ್ಕರ ತೀವ್ರಗೊಳಿಸುವ ಎಚ್ಚರಿಕೆ ನೀಡಲಾಗಿದೆ.
ಸರ್ಕಾರ ವಿರುದ್ಧ ವೈದ್ಯರ ಆಕ್ರೋಶ : ಮಾ.11 ರಿಂದ ಒಪಿಡಿ ಸೇವೆ ಬಂದ್
ಬೆಂಗಳೂರು: ರಾಜ್ಯದಲ್ಲಿ ಮುಂದಿನ ತಿಂಗಳು ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಸರ್ಕಾರದ ವಿರುದ್ಧ ವೈದ್ಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಔಷಧ ಪೂರೈಕೆ, ವೈದ್ಯರ ನೇಮಕ, ಬಡ್ತಿ ಮತ್ತು ವರ್ಗಾವಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾರ್ಚ್ 11ರಿಂದ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಸುಪ್ರೀಂ ತೀರ್ಪು ಧಿಕ್ಕರಿಸಿ ಟ್ರಂಪ್ ಹೊಸ ಬೆದರಿಕೆ: ಆಟವಾಡಿದರೆ ಭಾರಿ ಸುಂಕ!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾಗತಿಕವಾಗಿ ವಿಧಿಸಿದ್ದ ಸುಂಕ ನೀತಿಯನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ರದ್ದುಪಡಿಸಿದ ಬೆನ್ನಲ್ಲೇ, ಟ್ರಂಪ್ ಹೊಸ ಬೆದರಿಕೆ ಹಾಕಿದ್ದಾರೆ.
ಈ ತೀರ್ಪನ್ನು ಮುಂದಿಟ್ಟುಕೊಂಡು ಯಾರಾದರೂ ವ್ಯಾಪಾರ ಒಪ್ಪಂದಗಳ ವಿಷಯದಲ್ಲಿ ಆಟವಾಡಲು ಪ್ರಯತ್ನಿಸಿದರೆ, ಭಾರಿ ಪ್ರಮಾಣದ ಹಾಗೂ ಅತ್ಯಂತ ಕಠಿಣ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಶುಕ್ರವಾರ, ಅಮೆರಿಕ ಸುಪ್ರೀಂ ಕೋರ್ಟ್ 6-3ರ ಬಹುಮತದ ತೀರ್ಪು ನೀಡಿ, ಅಧ್ಯಕ್ಷರು ತಮ್ಮ ಕಾನೂನು ಅಧಿಕಾರವನ್ನು ಅತಿಕ್ರಮಿಸಿದ್ದಾರೆ ಎಂದು ಹೇಳಿತ್ತು. ಅಮೆರಿಕ ಕಾಂಗ್ರೆಸ್ ಅನುಮೋದನೆ ಪಡೆಯದೆ ಸುಂಕ ಹೇರಿಕೆ ತಪ್ಪು ಎಂದು ಸ್ಪಷ್ಟಪಡಿಸಿತ್ತು. ಈ ತೀರ್ಪಿನ ಕೆಲವು ಗಂಟೆಗಳ ನಂತರ, ಟ್ರಂಪ್ ವಿದೇಶಿ ಸರಕುಗಳ ಮೇಲೆ ಶೇ.10ರಷ್ಟು ಜಾಗತಿಕ ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ನಂತರ ಅದನ್ನು ಶೇ.15ಕ್ಕೆ ಏರಿಸಿದ್ದರು.